Monday, September 25, 2023

ಚಿಕನ್ ದಮ್ ಬಿರಿಯಾನಿ ಕೇವಲ 30 ನಿಮಿಷದಲ್ಲಿ ಮನೆಯಲ್ಲಿ ಮಾಡಿ...

ಚಿಕನ್ ದಮ್ ಬಿರಿಯಾನಿ ಕೇವಲ 30 ನಿಮಿಷದಲ್ಲಿ ಮನೆಯಲ್ಲಿ ಮಾಡಿ...


ಚಿಕನ್‌ ದಮ್‌ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು


- ನಾಲ್ಕು ಕಪ್‌ ಬಾಸುಮತಿ ಅಕ್ಕಿ (ಅಡುಗೆಗೂ ಮೊದಲೇ 45 ನಿಮಿಷ ನೆನೆಸಿಡಿ)


- ಒಂದೂವರೆ ಕೆಜಿ ಚಿಕನ್‌


- 250 ಗ್ರಾಂ ಮೊಸರು


- 2 ಟೇಬಲ್‌ ಸ್ಪೂನ್‌ ಕೆಂಪು ಮೆಣಸಿನ ಪುಡಿ


- 4 ಟೇಬಲ್‌ ಸ್ಪೂನ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌


- ಅರ್ಧ ಟೀ ಚಮಚ ಗರಂ ಮಸಾಲಾ


- ಅರ್ಧ ಟೀ ಚಮಚ ಏಲಕ್ಕಿ ಪುಡಿ


- ಒಂದು ಟೀ ಚಮಚ ಒಣಗಿದ ಗುಲಾಬಿ ಪಕಳೆ


- ಪಲಾವ್‌ ಎಲೆ 2


- ಸ್ಟಾರ್ ಸೋಂಪು-1


- ದಾಲ್ಚಿನ್ನಿ ಕಡ್ಡಿ 2 ಇಂಚು


- ಏಲಕ್ಕಿ 4


- ಲವಂಗ 5-6


- ಕರಿಮೆಣಸು 5-6


- ಉಪ್ಪು - 1 ಚಮಚ (ಅಗತ್ಯಕ್ಕೆ ಅನುಗುಣವಾಗಿ)


- 1 ಟೀ ಚಮಚ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು


- ಕೊತ್ತಂಬರಿ ಸೊಪ್ಪು - 1 ಕಪ್


- ಪುದೀನ ಎಲೆಗಳು - 1/2 ಕಪ್


- ಎಣ್ಣೆಯಲ್ಲಿ ಹುರಿದ ಈರುಳ್ಳಿ - 1 ಕಪ್


- 1 ನಿಂಬೆ ರಸ


ದಮ್‌ ಬಿರಿಯಾನಿ ರೈಸ್‌ಗೆ ಬೇಕಿರುವ ಸಾಮಗ್ರಿ


- ಒಂದು ದೊಡ್ಡ ಪಾತ್ರೆಯಲ್ಲಿ 12 ಕಪ್‌ ನೀರು (ಅಕ್ಕಿನ ಮೂರು ಪಟ್ಟು ಹೆಚ್ಚು ನೀರು) ಸೇರಿಸಿ


- ಜೀರಿಗೆ - 1 ಟೀಸ್ಪೂನ್


- ಸ್ಟಾರ್ ಸೋಂಪು-2


- ಲವಂಗ-4


- ಹಸಿರು ಏಲಕ್ಕಿ-4


- ದಾಲ್ಚಿನ್ನಿ ಕಡ್ಡಿ - 1 ಇಂಚು


- ಪುದೀನ ಎಲೆಗಳು - 1 ಟೀಸ್ಪೂನ್


- ಉಪ್ಪು - 2 ಚಮಚ (ರುಚಿಗೆ ತಕ್ಕಂತೆ)


- ಎಣ್ಣೆ - 1 ಟೀಸ್ಪೂನ್



ದಮ್‌ ಬಿರಿಯಾನಿ ಮಾಡುವ ವಿಧಾನ....


• ನೀವು ತೆಗೆದುಕೊಂಡ ಒಂದೂವರೆ ಕೆಜಿ ಚಿಕನ್‌ಗೆ 250 ಗ್ರಾಂ ಮೊಸರು, 2 ಟೇಬಲ್‌ ಸ್ಪೂನ್‌ ಕೆಂಪು ಮೆಣಸಿನ ಪುಡಿ, 4 ಟೇಬಲ್‌ ಸ್ಪೂನ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ.


• ಬಳಿಕ ಅರ್ಧ ಟೀ ಚಮಚ ಚಿಕನ್‌ ಮಸಾಲಾ, ಅರ್ಧ ಟೀ ಚಮಚ ಏಲಕ್ಕಿ ಪುಡಿ, ಪಲಾವ್‌ ಎಲೆ 2, ಸ್ಟಾರ್ ಸೋಂಪು ಹಾಕಿ.


• ದಾಲ್ಚಿನ್ನಿ ತುಂಡು, ಏಲಕ್ಕಿ 4, ಲವಂಗ 5-6, ಕರಿಮೆಣಸು 5-6 ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 1 ಟೀ ಚಮಚ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಹಾಕಿ.


• ಕೊತ್ತಂಬರಿ ಸೊಪ್ಪು - 1 ಕಪ್, ಪುದೀನ 1/2 ಕಪ್, ಎಣ್ಣೆಯಲ್ಲಿ ಕಂದು ಬಣ್ಣ ಬರುವಂತೆ ಹುರಿದ ಈರುಳ್ಳಿಯನ್ನು ಹಾಕಿ. ಅರ್ಧ ಬೌಲ್‌ ಎಣ್ಣೆ ಹಾಕಿ, 1 ಪೂರ್ತಿ ನಿಂಬೆ ರಸವನ್ನು ಹಿಂಡಿ.


• ಬಳಿಕ ಇದೆಲ್ಲವನ್ನು ಕೈಯಿಂದಲೇ ಚೆನ್ನಾಗಿ ಮಿಶ್ರಣ ಮಾಡಿ, ಕೆಲ ನಿಮಿಷ ನೆನೆಯಲು ಇಡಿ. ಇತ್ತ ನೆನೆದ ಬಳಿಕ ಗ್ಯಾಸ್‌ ಮೇಲೆ ಈ ಮಿಶ್ರಣವನ್ನಿಟ್ಟು 15 ನಿಮಿಷಗಳ ಕಾಲ ಕುಕ್‌ ಮಾಡಿ.


• ಇತ್ತ ಚಿಕನ್‌ 15 ನಿಮಿಷ ಬೇಯುವುದರ ವೇಳೆಯೇ ಪಕ್ಕದ ಇನ್ನೊಂದು ಸ್ಟೋವ್‌ ಮೇಲೆ ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಹಾಕಿ, ನೀರು ಕುದಿಯಲು ಪ್ರಾರಂಭಿಸಿದ ನಂತರ ನೆನಸಿದ ಅಕ್ಕಿಯನ್ನು ಮತ್ತೆ ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಸೇರಿಸಿ.


• ಈ ಕುದಿಯುವ ನೀರಿಗೆ ಮತ್ತೆ ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್‌ ಮೊಗ್ಗು, ಪಲಾವ್‌ ಎಲೆ ಹಾಕಿ, ನೆನೆಸಿದ ಅಕ್ಕಿಯನ್ನೂ ಹಾಕಿ.


• ಈ ಅಕ್ಕಿಯು 50% ಬೇಯಿಸುವವರೆಗೆ ಮಾತ್ರ ಹೆಚ್ಚಿನ ಉರಿಯಲ್ಲಿ ಬೇಯಿಸಿ, ತಕ್ಷಣ ಅಕ್ಕಿಯ ನೀರನ್ನು ಬಸಿಯಿರಿ.


• ಇತ್ತ ಇನ್ನೊಂದು ದೊಡ್ಡ ಪಾತ್ರೆ ತೆಗೆದುಕೊಂಡು ಅದಕ್ಕೆ ಮೊದಲಿಗೆ ಚೂರು ಎಣ್ಣೆ ಸವರಿ. 50ಷ್ಟು ಬೆಂದ ಅನ್ನವನ್ನು ಪಾತ್ರೆಯಲ್ಲಿ ಸ್ವಲ್ಪ ಸಮತಟ್ಟಾಗಿ ಸುರಿದುಕೊಳ್ಳಿ.


• ಅದರ ಮೇಲೆ ಒಂದು ಲೇಯರ್‌ ಬೆಂದ ಚಿಕನ್‌ ಮತ್ತು ಸ್ವಲ್ಪ ಗ್ರೇವಿಯನ್ನು ಸುರಿದು ಸಮನಾಗಿ ಮಾಡಿಕೊಳ್ಳಿ. ಮತ್ತೆ ಅದೇ ರೀತಿ ಇನ್ನೊಂದು ಲೇಯರ್‌ ಮಾಡಿಕೊಳ್ಳಿ. ಒಟ್ಟು ಎರಡು ಲೇಯರ್‌ ಚಿಕನ್‌, ಮೂರು ಲೇಯರ್‌ ಅನ್ನ ಹಾಕಿ ರೆಡಿ ಮಾಡಿ.


• ಹೀಗೆ ಸಿದ್ಧವಾದ ರೆಸಿಪಿಯ ಮೇಲ್ಭಾಗಕ್ಕೆ ತುಪ್ಪ ಸುರಿಯಿರಿ. ನಿಮಗೆ ಬೇಕಾದ ಫುಡ್‌ ಕಲರ್‌ ಹಾಕಿಕೊಳ್ಳಿ. ಫ್ರೈ ಮಾಡಲಾದ ಈರುಳ್ಳಿ ಹಾಕಿ, ಮುಚ್ಚಳ ಮುಚ್ಚಿ. 15ನಿಮಿಷ, ಸ್ಟೂಮ್‌ ಮೇಲೆ ತವೆಯನ್ನಿಟ್ಟು, ಅದರ ಮೇಲೆ ಮಿಶ್ರಣದ ಪಾತ್ರೆ ಇಟ್ಟು ಬೇಯಿಸಿ. ಈಗ ದಮ್‌ ಬಿರಿಯಾನಿ ಸವಿಯಲು ಸಿದ್ಧ.



Sunday, September 24, 2023

Best beauty tips for men (ಪುರುಷರಿಗೆ ಉತ್ತಮ ಸೌಂದರ್ಯ ಸಲಹೆಗಳು)

ಆರೋಗ್ಯಕರ ಮತ್ತು ಆಕರ್ಷಕ ಚರ್ಮವನ್ನು ಕಾಪಾಡಿಕೊಳ್ಳಲು ಪುರುಷರಿಗೆ ಸಹಾಯ ಮಾಡುವ ಐದು ಸೌಂದರ್ಯ ಸಲಹೆಗಳು ಇಲ್ಲಿವೆ:


 ನಿಯಮಿತವಾಗಿ ಸ್ವಚ್ಛಗೊಳಿಸಿ: ಕೊಳಕು, ಎಣ್ಣೆ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ದಿನಕ್ಕೆ ಎರಡು ಬಾರಿ (ಬೆಳಿಗ್ಗೆ ಮತ್ತು ರಾತ್ರಿ) ನಿಮ್ಮ ಮುಖವನ್ನು ತೊಳೆಯಲು ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸಿ.  ಇದು ಬಿರುಕುಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ತಾಜಾವಾಗಿ ಕಾಣುವಂತೆ ಮಾಡುತ್ತದೆ.


 ಮಾಯಿಶ್ಚರೈಸ್: ನಿಮ್ಮ ತ್ವಚೆಯನ್ನು ಹೈಡ್ರೀಕರಿಸಲು ಮತ್ತು ಶುಷ್ಕತೆಯನ್ನು ತಡೆಯಲು ಪ್ರತಿದಿನ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.  ನಿಮ್ಮ ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸಲು SPF ನೊಂದಿಗೆ ಉತ್ಪನ್ನಗಳನ್ನು ನೋಡಿ.


 ಸೂರ್ಯನ ರಕ್ಷಣೆ: ನೀವು ಸೂರ್ಯನಿಗೆ ತೆರೆದುಕೊಂಡಾಗ ಕನಿಷ್ಠ SPF 30 ಇರುವ ಸನ್‌ಸ್ಕ್ರೀನ್ ಬಳಸಿ.  ಇದು ಅಕಾಲಿಕ ವಯಸ್ಸಾದ, ಸೂರ್ಯನ ಕಲೆಗಳು ಮತ್ತು ಚರ್ಮದ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ.


 ಆರೋಗ್ಯಕರ ಆಹಾರ: ಹಣ್ಣುಗಳು, ತರಕಾರಿಗಳು ಮತ್ತು ನೀರಿನಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ನಿಮ್ಮ ಚರ್ಮದ ನೋಟವನ್ನು ಸುಧಾರಿಸುತ್ತದೆ.  ಮೀನು ಮತ್ತು ಬೀಜಗಳಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲಗಳು ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ.



 ನೈರ್ಮಲ್ಯ: ನಿಯಮಿತ ಹೇರ್ಕಟ್ಸ್, ಮುಖದ ಕೂದಲನ್ನು ಟ್ರಿಮ್ ಮಾಡುವುದು ಮತ್ತು ಉಗುರುಗಳನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡುವುದು ಸೇರಿದಂತೆ ಉತ್ತಮ ಅಂದಗೊಳಿಸುವ ಅಭ್ಯಾಸಗಳನ್ನು ಕಾಪಾಡಿಕೊಳ್ಳಿ.  ಅಲ್ಲದೆ, ನಿಯಮಿತವಾಗಿ ಸ್ನಾನ ಮಾಡಲು ಮರೆಯಬೇಡಿ.



 ನೆನಪಿಡಿ, ಸ್ಥಿರತೆ ಮುಖ್ಯವಾಗಿದೆ.  ಚರ್ಮದ ಆರೈಕೆಯ ದಿನಚರಿಯನ್ನು ಸ್ಥಾಪಿಸುವುದು ಮತ್ತು ಅದಕ್ಕೆ ಅಂಟಿಕೊಳ್ಳುವುದು ಕಾಲಾನಂತರದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

Saturday, September 23, 2023

What are the best online businesses to start? (ಅತ್ಯುತ್ತಮ ಆನ್‌ಲೈನ್ ವ್ಯಾಪಾರ ಐಡಿಯಾಗಳು)

 ಅತ್ಯುತ್ತಮ ಆನ್‌ಲೈನ್ ವ್ಯಾಪಾರ ಐಡಿಯಾಗಳು


ಪ್ರಾರಂಭಿಸಲು ಉತ್ತಮ ಆನ್‌ಲೈನ್ ವ್ಯವಹಾರಗಳು ಯಾವುವು?


 ಪ್ರಾರಂಭಿಸಲು ಉತ್ತಮ ಆನ್‌ಲೈನ್ ವ್ಯಾಪಾರವು ನಿಮ್ಮ ಕೌಶಲ್ಯಗಳು, ಆಸಕ್ತಿಗಳು ಮತ್ತು ಮಾರುಕಟ್ಟೆ ಬೇಡಿಕೆಯನ್ನು ಅವಲಂಬಿಸಿರುತ್ತದೆ.  ಕೆಲವು ಜನಪ್ರಿಯ ಆಯ್ಕೆಗಳು ಇಲ್ಲಿವೆ:


 1. ಇ-ಕಾಮರ್ಸ್: ನಿಮ್ಮ ಸ್ವಂತ ಆನ್‌ಲೈನ್ ಸ್ಟೋರ್ ಅಥವಾ Shopify, Amazon, ಅಥವಾ eBay ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಿ.


 2. ಡ್ರಾಪ್‌ಶಿಪಿಂಗ್: ದಾಸ್ತಾನುಗಳನ್ನು ಹಿಡಿದಿಟ್ಟುಕೊಳ್ಳದೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಪೂರೈಕೆದಾರರೊಂದಿಗೆ ಪಾಲುದಾರರಾಗಿ.


 3. ಅಂಗಸಂಸ್ಥೆ ಮಾರ್ಕೆಟಿಂಗ್: ಉತ್ಪನ್ನಗಳು ಅಥವಾ ಸೇವೆಗಳನ್ನು ಉತ್ತೇಜಿಸಿ ಮತ್ತು ನಿಮ್ಮ ಉಲ್ಲೇಖದ ಮೂಲಕ ಮಾಡಿದ ಪ್ರತಿ ಮಾರಾಟಕ್ಕೆ ಕಮಿಷನ್ ಗಳಿಸಿ.


 4. ಬ್ಲಾಗಿಂಗ್: ಸ್ಥಾಪಿತ ಬ್ಲಾಗ್ ಅನ್ನು ರಚಿಸಿ ಮತ್ತು ಜಾಹೀರಾತುಗಳು, ಅಂಗಸಂಸ್ಥೆ ಮಾರ್ಕೆಟಿಂಗ್ ಅಥವಾ ಪ್ರಾಯೋಜಿತ ವಿಷಯದ ಮೂಲಕ ಹಣಗಳಿಸಿ.


5. ಆನ್‌ಲೈನ್ ಕೋರ್ಸ್‌ಗಳು: ಆನ್‌ಲೈನ್ ಕೋರ್ಸ್‌ಗಳು ಅಥವಾ ಟ್ಯುಟೋರಿಯಲ್‌ಗಳನ್ನು ರಚಿಸುವ ಮತ್ತು ಮಾರಾಟ ಮಾಡುವ ಮೂಲಕ ನಿಮ್ಮ ಪರಿಣತಿಯನ್ನು ಹಂಚಿಕೊಳ್ಳಿ.


 6. ಫ್ರೀಲ್ಯಾನ್ಸಿಂಗ್: ಬರವಣಿಗೆ, ಗ್ರಾಫಿಕ್ ವಿನ್ಯಾಸ, ಪ್ರೋಗ್ರಾಮಿಂಗ್ ಅಥವಾ ಡಿಜಿಟಲ್ ಮಾರ್ಕೆಟಿಂಗ್‌ನಂತಹ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ನಿಮ್ಮ ಕೌಶಲ್ಯಗಳನ್ನು ನೀಡಿ.


 7. ಚಂದಾದಾರಿಕೆ ಬಾಕ್ಸ್ ಸೇವೆ: ಸ್ಥಾಪಿತ ಉತ್ಪನ್ನಗಳೊಂದಿಗೆ ಚಂದಾದಾರಿಕೆ ಪೆಟ್ಟಿಗೆಗಳನ್ನು ಕ್ಯುರೇಟ್ ಮಾಡಿ ಮತ್ತು ಮಾರಾಟ ಮಾಡಿ.


 8. ವಿಷಯ ರಚನೆ: YouTube ಚಾನಲ್, ಪಾಡ್‌ಕ್ಯಾಸ್ಟ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಯನ್ನು ಪ್ರಾರಂಭಿಸಿ ಮತ್ತು ಜಾಹೀರಾತುಗಳು ಮತ್ತು ಪ್ರಾಯೋಜಕತ್ವಗಳ ಮೂಲಕ ಹಣಗಳಿಸಿ.


9. ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್ ಅಭಿವೃದ್ಧಿ: ನಿಮ್ಮ ಸ್ವಂತ ಸಾಫ್ಟ್‌ವೇರ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ರಚಿಸಿ ಮತ್ತು ಮಾರಾಟ ಮಾಡಿ.


 10. ವರ್ಚುವಲ್ ಸಹಾಯಕ ಸೇವೆಗಳು: ಆಡಳಿತಾತ್ಮಕ, ಸಾಮಾಜಿಕ ಮಾಧ್ಯಮ ಅಥವಾ ಗ್ರಾಹಕ ಬೆಂಬಲ ಸೇವೆಗಳನ್ನು ದೂರದಿಂದಲೇ ನೀಡುತ್ತವೆ.


 ಯಾವುದೇ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಲು ನಿಮ್ಮ ಗುರಿ ಮಾರುಕಟ್ಟೆ, ಸ್ಪರ್ಧೆ ಮತ್ತು ವ್ಯವಹಾರ ಮಾದರಿಯನ್ನು ಸಂಶೋಧಿಸಿ.

Tuesday, August 18, 2020

ತುಂಗಭದ್ರಾ ಅಣೆಕಟ್ಟು ನಿರ್ಮಾಣದ ಇತಿಹಾಸ | Tungabhadra Dam history.

Tungabhadra dam image







 ತುಂಗಭದ್ರಾ ಅಣೆಕಟ್ಟು ಈ ಹೆಸರು ಕೇಳಿದರೆ ಸಾಕು ಅದೆಷ್ಟೋ ಜನ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಕಾರಣ ಸುಮಾರು 150 ವರ್ಷಗಳಿಂದ ಬರಗಾಲದಿಂದ ಬರಡಾಗಿದ್ದ ಭೂಮಿಯು ಇಂದು ಹಚ್ಚ ಹಸಿರಿನ ನಾಡಾಗಿದೆ. 

            ಅದು 1876 ದಕ್ಷಿಣ ಭಾರತದಲ್ಲಿ ಭೀಕರ ಬರಗಾಲ ಎದುರಾಯಿತು, ಈ ಅವಧಿಯಲ್ಲಿ ಬಳ್ಳಾರಿ, ರಾಯಚೂರು,ಕರ್ನೂಲು ಕನಾ೯ಟಕ ಹಾಗೂ ಆಂಧ್ರಪ್ರದೇಶದ ಅನೇಕ ಜಿಲ್ಲೆಗಳು ಸೇರಿದಂತೆ ಮಳೆಯ ಅಭಾವದಿಂದ ಬೆಳೆ ನಾಶವಾಗಿ ಜನರಿಗೆ ಮತ್ತು ಜಾನುವಾರುಗಳಿಗೆ ಅನ್ನ ನೀರಿಲ್ಲದೆ ಜೀವಂತ ಅಸ್ಥಿಪಂಜರದಂತಾಗಿ ಪ್ರಾಣಬಿಟ್ಟವು. ಮಲೇರಿಯಾ, ಕಾಲರಾ, ಪ್ಲೇಗ್ ನಂತಹ ಮಹಾಮಾರಿ ರೋಗಗಳ ಕಾಟದಿಂದಾಗಿ ಸತ್ತ ಜನರಿಂದ ಊರು ಕೇರಿಗಳು ತುಂಬಿಹೋಗಿದ್ದವು. ಸತ್ತವರ ಸಂಸ್ಕಾರಕ್ಕೂ ಜನರಲ್ಲಿದೆ ನರಿ,ನಾಯಿ,ರಣಹದ್ದು,ಕಾಗೆಗಳಿಗೆ ಅದೆಷ್ಟೋ ಜನ ಆಹಾರವಾಗಿ ಹೋದರು. ಇಡೀ ದಕ್ಷಿಣ ಭಾರತದಲ್ಲಿ ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಬರದಿಂದ ಅಳಿದು ಹೋಯಿತು ಎಂದರೆ ನೀವು ನಂಬಲೇಬೇಕು. 


       ಬ್ರಿಟಿಷರು ಬರ ಪರಿಹಾರಕ್ಕಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು ದುರ್ಬಲರು ಹಾಗೂ ಮಕ್ಕಳಿಗೆ ಉಚಿತ ಗಂಜಿ ನೀಡುವುದರ ಮೂಲಕ ಮಾನವೀಯತೆ ಮೆರೆದರು. ಈ ಬರಗಾಲದ ಪರಿಸ್ಥಿತಿಯನ್ನು ಕಣ್ಣಾರೆ ಕಂಡಂತಹ ಬ್ರಿಟಿಷ್ ನೀರಾವರಿ ತಜ್ಞ ಅರ್ಥರ್ ಕಾಟನ್ ಅವರು ಬಳ್ಳಾರಿ, ರಾಯಚೂರು, ಕರ್ನೂಲು, ಅನಂತಪುರ ಪ್ರಾಂತ್ಯದ ಜನರ ಬರವನ್ನು ಕಾಯಮ್ಮಾಗಿ ಅಳಿಸಿ ಆಗಬೇಕೆಂದರೆ ತುಂಗಭದ್ರ ನದಿಗೆ ಅಡ್ಡಲಾಗಿ ಒಂದು ಆಣೆಕಟ್ಟನ್ನು ಈಗಿನ ಹೊಸಪೇಟೆಯ ಪಕ್ಕದಲ್ಲಿ ನಿರ್ಮಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆದರೆ ಬ್ರಿಟಿಷ್ ಸರ್ಕಾರ ಹಣಕಾಸಿನ ಕೊರತೆ ನೆಪದಲ್ಲಿ ಯೋಜನೆಯನ್ನು ಮುಂದಕ್ಕೆ ಹಾಕಿತು. 

ನಂತರ 1902 ರಲ್ಲಿ ಮದ್ರಾಸ್ ಸರ್ಕಾರದ ಮುಖ್ಯ ಇಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ಅವರು ತುಂಗಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ನೀರಾವರಿ ಆಯೋಗಕ್ಕೆ ಸಲ್ಲಿಸಿದರು, ಆದರೆ ಅದು ಕೂಡಾ ಕಾರ್ಯರೂಪಕ್ಕೆ ಬರಲಿಲ್ಲ ನಂತರ ಬಂದ ಮುಖ್ಯ ಇಂಜಿನಿಯರ್ ಮೆಕೆಂಜಿ ಅವರು ಹೊಸಪೇಟೆಯ ಪಕ್ಕದಲ್ಲಿದ್ದ ಮಲ್ಲಾಪುರದ ಎರಡು ಗುಡ್ಡಗಳ ನಡುವೆ ಆಣೆಕಟ್ಟನ್ನು ನಿರ್ಮಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು ಆದರೆ ಹೈದರಾಬಾದ್ ನಿಜಾಮ್ ಸರ್ಕಾರದ ಅಧಿಕಾರಿಗಳು ಈ ನದಿಯ ಮೇಲೆ ನಮಗೂ ಹಕ್ಕಿದೆ ಮತ್ತು ಈ ಆಣೆಕಟ್ಟನ್ನು ನಮ್ಮ ಪ್ರದೇಶದಲ್ಲಿ ಮಾಡಬೇಕೆಂದು ಪಟ್ಟು ಹಿಡಿದರು. 

ಮುಂಬೈ ಪ್ರಾಂತ್ಯ ಸರ್ಕಾರ, ಮೈಸೂರು ರಾಜರ ಸರ್ಕಾರ, ಹೈದರಾಬಾದ್ ನಿಜಾಮ ಸರಕಾರ ಮತ್ತು ಮದ್ರಾಸ್ ಪ್ರಾಂತ್ಯ ಸರ್ಕಾರ ಈ ನಾಲ್ಕು ಸರ್ಕಾರಗಳು ತಮ್ಮ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಆಣೆಕಟ್ಟನ್ನು ನಿರ್ಮಿಸಬೇಕೆಂದು ಪಟ್ಟು ಹಿಡಿದಿದ್ದವು ಇವರುಗಳ ಕಚ್ಚಾಟದಿಂದಾಗಿ ಆಣೆಕಟ್ಟು ಕಟ್ಟುವ ಕೆಲಸ ಮೂಲೆಗುಂಪು ಆಗಿಹೋಗಿತ್ತು.

ಕೊನೆಗೆ 1940 ರಲ್ಲಿ ಮದ್ರಾಸ್ ಸರ್ಕಾರ ಮತ್ತೆ ಯೋಜನೆಯನ್ನು ಕೈಗೆತ್ತಿಕೊಂಡಿತು ಆಗಿನ ಮುಖ್ಯ ಎಂಜಿನಿಯರ್ ಆಗಿದ್ದ ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ವರದಿಯನ್ನು ಸಿದ್ಧಪಡಿಸಲು ಸೂಚಿಸಲಾಯಿತು, ಇದನ್ನು ತಿಳಿದು ಸುಮ್ಮನಿರದ ನಿಜಾಮರ ಸರ್ಕಾರ ಸಿಸಿ ದಲಾಲ್ ಎಂಬ ಇಂಜಿನಿಯರ್ ಅನ್ನು ನೇಮಿಸಿ ಪ್ರತ್ಯೇಕವಾಗಿ ವರದಿಯನ್ನು ಸಲ್ಲಿಸಿತು. ಈ ಎರಡು ವರದಿಗಳನ್ನು ಅಳೆದು ತೂಗಿ ನೋಡಿದ ಬ್ರಿಟಿಷ್ ಸರ್ಕಾರ ಕೊನೆಗೆ 1942ರಲ್ಲಿ ತಿರುಮಲೆ ಅಯ್ಯಂಗಾರ್ ನೀಡಿದ ವರದಿಯ ಅತ್ಯಂತ ಸೂಕ್ತವಾದುದು ಎಂದಿತು. 



ಈಗಿನ ಹೊಸಪೇಟೆಯ ಹತ್ತಿರ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣ ಆರಂಭವಾಯಿತು.

 28ನೇ ಫೆಬ್ರುವರಿ 1945 ರಂದು ಹೈದ್ರಾಬಾದ್ ನಿಜಾಮ ಮದ್ರಾಸ್ ಸರಕಾರದ ಗವರ್ನರ್ ಸರ್ ಆರ್ಥರ್ ಹೋಪ್ ಅಡಿಗಲ್ಲನ್ನು ಹಾಕಿ ಯೋಜನೆಯನ್ನು ಉದ್ಘಾಟಿಸಿದರು. 

ಪ್ರಾರಂಭದಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು ಆದರೆ ನಿರ್ಮಾಣ ವಸ್ತುಗಳ ಬಳಕೆಯ ವಿವಾದ ,ನಿಜಾಮರ ಆಳ್ವಿಕೆಯ ಅಂತ್ಯ ,ಆಗತಾನೆ ದೇಶಕ್ಕೆ ಸ್ವಾತಂತ್ರ್ಯ , ಬದಲಾದ ಆಡಳಿತ ಮಂಡಳಿ ಇಗೆ ಅನೇಕ ಕಾರಣಗಳಿಂದ ಯೋಜನೆ ಕುಂಟುತ್ತ ಸಾಗಿತು. 

             ಕೆಲವು ದಿನಗಳ ನಂತರ ಸರ್ ಎಂ ವಿಶ್ವೇಶ್ವರಯ್ಯ ನೇತೃತ್ವದ ಎಂಜಿನಿಯರ್ ಮಂಡಳಿಗೆ ಅಣೆಕಟ್ಟು ನಿರ್ಮಾಣದ ಮೇಲುಸ್ತುವಾರಿಯನ್ನು ವಹಿಸಲಾಯಿತು ಆಗ ಮತ್ತೆ ನಿರ್ಮಾಣದ ಕಾರ್ಯ ಭರದಿಂದ ಸಾಗಿತ್ತು. 

Tungabhadra dam construction, rare photos and videos. - hospet.online

ಅತ್ಯಾಧುನಿಕ ಯಂತ್ರಗಳ ಇಲ್ಲದೆ 340 ಕಿಲೋಮೀಟರ್ ಉದ್ದದ ಕಾಲುವೆಗಳ ನಿರ್ಮಾಣಕ್ಕೆ ಕೇವಲ ಮಾನವ ಶಕ್ತಿ ಬಳಕೆಯಾಯಿತು ಎಂದರೆ ನೀವು ನಂಬಲೇಬೇಕು ಕಲ್ಲು ಗುಡ್ಡಗಳಲ್ಲಿ ಕಿಲೋಮೀಟರುಗಟ್ಟಲೆ ಸುರಂಗವನ್ನು ಕೊರೆದು ಕಾಲುವೆ ನಿರ್ಮಿಸಿದರು ಹೀಗೆ ಅನೇಕ ಕಠಿಣ ಸವಾಲುಗಳನ್ನು ಎದುರಿಸಿ 1953 ರಲ್ಲಿ ಮೊದಲ ಬಾರಿಗೆ ಕಾಲುವೆಯಲ್ಲಿ ನೀರು ಹರಿಯಿತು. 

         ಈ ಅಣೆಕಟ್ಟಿನಿಂದಾಗಿ ಬರಡು ಭೂಮಿಯಾಗಿದ್ದ ಬಳ್ಳಾರಿ, ರಾಯಚೂರು, ಅನಂತಪುರ, ಕರ್ನೂಲು ಮಹೆಬೂಬುನಗರಗಳ ಸುಮಾರು 16 ಲಕ್ಷ ಎಕರೆ ಜಮೀನಿನಲ್ಲಿ ಭತ್ತ,ಕಬ್ಬು ಬೆಳೆಯಲಾಗುತ್ತಿದೆ. ಗಂಗಾವತಿ ,ಸಿರುಗುಪ್ಪ ,ಸಿಂಧನೂರು ಪ್ರದೇಶಗಳನ್ನು ಭತ್ತ ದ ಕಣಜವೇಂದು ಗುರುತಿಸಲಾಗಿದೆ. ಇಂದು ಇದೆ ಅಣೆಕಟ್ಟಿನ ಆಸರೆಯಿಂದ ಕಾರ್ಖಾನೆಗಳು ಅಕ್ಕಿ ಗಿರಣಿಗಳು ಹೀಗೆ ಅನೇಕ ಕೈಗಾರಿಕೆಗಳು ಜಿಲ್ಲೆಗಳಲ್ಲಿ ನೆಲೆಸಿವೆ ಮೀನುಗಾರಿಕೆ ಒಂದು ದೊಡ್ಡ ಉದ್ಯಮವಾಗಿದೆ. ಈ ಭಾಗದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧಿಸಿದೆ. ಸುಮಾರು ಒಂದು ಕೋಟಿಗೂ ಅಧಿಕ ಜನರು ತುಂಗಭದ್ರಾ ಅಣೆಕಟ್ಟಿನ ನೀರನ್ನು ಬಳಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

Dr. Thirumalai Iyengar | The main architecture of the Tungabhadra dam        

 ಈ ಸಮೃದ್ಧಿಗೆ ಕಾರಣರಾದ ತಿರುಮಲೆ ಅಯ್ಯಂಗಾರ್ ಅವರ ಸವಿನೆನಪಿಗಾಗಿ ಕೆಲ ರೈತರು ಸೇರಿ ಆಣೆಕಟ್ಟಿನ ಬಲದಂಡೆ ಮೇಲೆ ಅವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ.